Kannada Quotes: “Namaskargalu Kannadigare” I am here to help you regarding the best new Kannada quotes about life and thoughts that are meaningful and inspirational. For love, life, a sad feeling, kannada motivational quotes, and kannada thoughts, all types of the latest quotes with high quality HD pictures are here for you to download and copy freely.
ಕೆಳಗೆ ನಾನು ಕನ್ನಡದ ಜೀವನ ಮತ್ತು ಆಲೋಚನೆಗಳ ಬಗ್ಗೆ ಕೆಲವು ಅತ್ಯುತ್ತಮ ಹೊಸ ಉಲ್ಲೇಖಗಳು ನೀಡಿದ್ದೇವೆ. ಹಾಗೂ ಕನ್ನಡದ ನುಡಿಮುತ್ತುಗಳು, ದುಃಖ ಹಾಗೂ ನೋವಿನ ಭಾವನೆಗಳು, ಮತ್ತು ಬದುಕು ಬದಲಿಸಿದ ಮಾತುಗಳು, ಕನ್ನಡದ ಎಲ್ಲಾ ವಿವಿಧ ರೀತಿಯ ಉಲ್ಲೇಖಗಳನ್ನು ನಾವು ನಿಮಗಾಗಿ ತಂದಿದ್ದೇವೆ.
Kannada Quotes About Life

ನಿನ್ನ ಸಾಧನೆಯ ಹಿಂದೆ ಎಲ್ಲರೂ ನಿಲ್ತಾರೆ ಆದರೆ ನಿನ್ನ ಸೋಲಿನ ಹಿಂದೆಯೂ ನಿಲ್ಲುವವರು ನಿನ್ನ ಹೆತ್ತವರು ಮಾತ್ರ.

ಸೇವೆ ಎಲ್ಲರಿಗೂ ಮಾಡು..!! ಆದರೆ ಪ್ರತಿಫಲ ಯಾರಲ್ಲೂಬಯಸಬೇಡ..!! ಏಕೆಂದರೆ ಸೇವೆಯ ಪ್ರತಿಫಲನೀಡುವವನು ಭಗವಂತನೇ ವಿನಃಮನುಷ್ಯನಲ್ಲ..!!

ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ, ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು…

ನಡೆವ ಹಾದಿಯಲ್ಲಿ ಚುಚ್ಚುವ ಮುಳ್ಳಿದ್ದರೆ ಪಾದರಕ್ಷೆಯ ಮೆಟ್ಟಿ ನಡೆ, ಬದುಕಿನ ಹಾದಿಯಲ್ಲಿ ಚುಚ್ಚಿ ಮಾತನಾಡುವವರಿದ್ದರೆ ಪಾದರಕ್ಷೆ ಬಿಡುವಸ್ಥಳದಲ್ಲಿ ಬಿಟ್ಟು ನಡೆ.

ಸೋತರು ಸರಿಆದರೆ ಸ್ವಾಭಿಮಾನಮಾತ್ರ ಬಿಡ ಬೇಡತಿಳಿದು ನಡಿ ಇದೇ ಜೀವನ.

ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ….

ಒಳ್ಳೆಯ ಸಂಬಂಧಗಳನ್ನ ಪ್ರೀತಿಕೊಟ್ಟು ಉಳಿಸಿಕೊಳ್ಳಿ, ಕೆಟ್ಟ ಸಂಬಂಧಗಳನ್ನ ಮೌನವಾಗಿದ್ದು ಕಳೆದುಕೊಳ್ಳಿ.

ಬಿದ್ದವರನ್ನು ಕಂಡು ನಗಬೇಡ ಬಡತನದಲ್ಲಿ ಇರುವುದನ್ನು ಕಂಡು ತಿರಸ್ಕರಿಸಬೇಡ, ಹಸಿದವರನ್ನು ಕಂಡು ಕಾಣದಂತಿರಬೇಡ ನಾವು ಕಾಲಚಕ್ರದೊಳಗೆ ಇರುವೆನೆಂಬುದು ಎಂದಿಗೂ ಮರೆಯಬೇಡ.

ಯಾವ ವ್ಯಕ್ತಿಯು ಕೆಟ್ಟದಿನಗಳನ್ನ ತನ್ನ ಜೀವನದಲ್ಲಿ ನೋಡಿರುತ್ತಾನೋ ಅವನು ಎಂದಿಗೂ ಬೇರೆಯವರಿಗೆ ಕೆಟ್ಟದನ್ನ ಬಯಸುವುದಿಲ್ಲ!

ಸಾಧನೆ ಮಾಡುವಾಗ ಅವಮಾನಗಳು ನೂರಾರು,ಸಾಧಿಸಿ ತೋರಿಸಿದರೆ ಬಹುಮಾನಗಳು ಸಾವಿರಾರು.

ಗುರಿಯೆಂಬುದು ದೂರದ ಬೆಟ್ಟದಲ್ಲಿರುವ ಬಂಡೆಕಲ್ಲಿನಂತೆ…. ಆ ಬಂಡೆಕಲ್ಲನ್ನು ಹೊಡೆದು ಹಾಕಲು ನಿಮಿಷ ಸಾಕು ಶಿಲೆಯಾಗಿಸಲು ವರುಷಗಳೇ ಬೇಕು…

ತಾಳ್ಮೆ ಹೇಗಿರಬೇಕೆಂದರೆ, ಬೇರೆಯವರು ನಿಮಗೆ ಅವಮಾನ ಮಾಡಿ ತಪ್ಪು ಮಾಡಿದೆ ಎಂದು ಪಶ್ಚತ್ತಾಪ ಪಡುವ ಹಾಗಿರಬೇಕು..!!

ನೀವು ಇನ್ನೊಬ್ಬರನ್ನು ತುಳಿದರೆ, ನಿಮ್ಮನ್ನು ತುಳಿಯಲು ಇನ್ನೊಬ್ಬರು ಹುಟ್ಟಿಕೊಳ್ಳುತ್ತಾರೆ.

ನಂಬಿಕೆ ಇದ್ದರೆ ವ್ಯರ್ಥದಲ್ಲೂ ಅರ್ಥ ಸಿಗುತ್ತದೆ, ನಂಬಿಕೆ ಇಲ್ಲದಿದ್ದರೇ ಅರ್ಥದಲ್ಲೂ ವ್ಯರ್ಥ ಕಾಣುತ್ತದೆ.

ಬದುಕಲ್ಲಿ ಪ್ರಾಮಾಣಿಕತೆ ಮತ್ತುನಿಷ್ಠೆಯಿಂದ ಇರೊರು ಯಾವಾಗಲೂ ಒಬ್ಬಂಟಿಯಾಗಿರುತ್ತಾರೆ.

ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡ ನಂತರವೂ ನಿಮ್ಮನ್ನು ನೋಯಿಸುವವರು ಎಂದೆಂದಿಗೂ ನಿಮ್ಮವರಾಗಲು ಸಾಧ್ಯವಿಲ್ಲ.

ಕತ್ತಲೆಯನ್ನು ಮೀರಿ ಬೆಳಕು ನೀಡುವುದರಿಂದಲೇ “ದೀಪಕ್ಕೆ ಬೆಲೆ” ಕಷ್ಟಗಳನ್ನು ಮೀರಿ ಬೆಳೆದು ನಿಂತಾಗಲೇ “ಬದುಕಿಗೊಂದು ಬೆಲೆ”

ನಗುವಿಗಿರುವ ಬೆಲೆ ನೋವಿಗಿಲ್ಲ, ಹಣಕ್ಕೆ ಇರುವ ಬೆಲೆ ಗುಣಕ್ಕಿಲ್ಲ ಹಾಗೆಯೇ ಸುಳ್ಳಿಗೆ ಇರುವ ಬೆಲೆ ಸತ್ಯಕ್ಕೆ ಇಲ್ಲ.”ಇದೆ ಪ್ರಪಂಚ”

ತಿಳಿದು ಬರೋದು”ಜನನ” ತಿಳಿಯದೇ ಬರೋದು “ಮರಣ” ತಿಳಿದು ಬದುಕುವುದೇ “ಜೀವನ”

ಉತ್ತರ ವಿಲ್ಲದ ಪ್ರಶ್ನೆಗಳು? ಅರ್ಥವಿಲ್ಲದ ನೋವುಗಳು💔 ನಿದ್ದೆ ಇಲ್ಲದ ರಾತ್ರಿಗಳು🥺 ನೆಮ್ಮದಿ ಇಲ್ಲದ ಹಗಲುಗಳು😔 ಮರೆತು ಹೋದ ಮನಸ್ಸುಗಳು🥀 ಮರೆಯಾದೆ ಬರುವ ಕಣ್ಣ ನೀರುಗಳು😢 ಕಳೆದು ಹೋದ ನಿನ್ನೆಗಳು ಕಾಣದೆ ಬರುವ ನಾಳೆಗಳು ಆದರೂ ಸದ್ದಿಲ್ಲದೆ ಸಾಗುತ್ತಿದೆ ಜೀವನದ ಹೆಜ್ಜೆಗಳು.

ನಾಲಿಗೆಗೆ ಮೂಳೆ ಇಲ್ಲದಿರಬಹುದು, ಆದರೆ ಅದು ಹೃದಯವನ್ನೇ ಒಡೆಯುವಷ್ಟು ಬಲಿಷ್ಠವಾಗಿದೆ. ಹಾಗಾಗಿ, ಮಾತಿನ ಮೇಲೆ ಎಚ್ಚರ ಇರಲಿ…

ಕೋಪ ಒಬ್ಬರನ್ನು ಸೋಲಿಸಿದರೆ, ನಗು ನೂರು ಜನರನ್ನು ಗೆಲ್ಲುತ್ತದೆ… ❤️

ಕರಗದವರ ಹತ್ತಿರ ಕೋರಿಕೊಂಡರೇ ಪ್ರಾಯೋಜನವಿಲ್ಲ, ಮರೆತವರ ಹತ್ತಿರ ಮಮಕಾರದಿಂದ್ದಿದ್ದರೇ ಅರ್ಥವಿಲ್ಲ.

ನೆನಪುಗಳು ಎಂದಿಗೂ ಮಾಸುವುದಿಲ್ಲ, ಮರೆತಂತೆ ನಟಿಸಬಹುದು ಅಷ್ಟೆ.
ಮತ್ತೊಬ್ಬರ ಕಣ್ಣೀರನ್ನು ಒರೆಸುವ
ಹೃದಯವಂತಿಕೆ ನಮ್ಮಲ್ಲಿದ್ದರೆ
ನಮ್ಮ ಕಣ್ಣೀರನ್ನು ಒರೆಸಲು ದೇವರು ಮತ್ತೊಬ್ಬರ
ರೂಪದಲ್ಲಿ ಬಂದೇ ಬರುತ್ತಾನೆ.
ಜೀವನದ ಬಗ್ಗೆ ಎರಡು
ಮಾತಿನಲ್ಲಿ ಹೇಳಬೇಕೆಂದರೆ…..?
ಕಣ್ಣಿಗೆ ಇಷ್ಟವಾಗಿದ್ದು ಕೈಯಲ್ಲಿ
ಇರುವುದಿಲ್ಲ. ಮನಸ್ಸಿಗೆ
ಇಷ್ಟವಾದದ್ದು ಜೀವನದಲ್ಲಿ
ಸಿಗುವುದಿಲ್ಲ…..
“ಅಳಬೇಡ ನಿನ್ನವರಿಲ್ಲದ ಈ ಜಗದಲ್ಲಿ, ನಿನ್ನವರು
ಇರುತ್ತಿದ್ದರೆ ಅಳುವುದಕ್ಕೆ ಬಿಡುತ್ತಿರಲಿಲ್ಲ”
ಅಪ್ಪ-ಅಮ್ಮ ಇಲ್ಲದೆ ಇರುವವರು ಅನಾಥರಲ್ಲ, ಅಪ್ಪ ಅಮ್ಮನ ಬೆಲೆ ಗೊತ್ತಿಲ್ಲದೇ ಇರುವವರು ನಿಜವಾದ ಅನಾಥರು..!
ಅವಶ್ಯಕತೆಗಿಂತ ಹೆಚ್ಚು ಒಳ್ಳೆಯವರಾಗದಿರಿ,
ಯಾಕಂದ್ರೆ ನಿಮ್ಮನ್ನ ಅವಶ್ಯಕತೆಗೂ ಮೀರಿ ಬಳಸಿಕೊಳ್ಳಲಾಗುತ್ತೆ.
ಕೇವಲ ಬಲಿಷ್ಠ ವ್ಯಕ್ತಿಗಳು ಮಾತ್ರ ಕ್ಷಮೆ ಕೇಳುತ್ತಾರೆ, ಮತ್ತೆ ಕ್ಷಮಿಸುವ ವ್ಯಕ್ತಿಗಳು ಅವರಿಗಿಂತಲೂ ಹೆಚ್ಚು ಬಲಿಷ್ಠರಾಗಿರುತ್ತಾರೆ.